Adsense

Tuesday 7 July 2020

ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ನಿಜವಾಗಿಯೂ ಕೆಲಸ ಮಾಡುತ್ತ?

ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ನಿಜವಾಗಿಯೂ ಕೆಲಸ ಮಾಡುತ್ತ? 

ಖಂಡಿತ ....................

ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ಸುಲಭವಾಗಿ ನಮಗೆ ಪರಿಹಾರ ನೀಡುವುದಿಲ್ಲ, ನಮ್ಮ ಕುಂಡಲಿಯು ಬ್ರಹ್ಮಲಿಖಿತ ಕುಂಡಲಿಯಾಗಿದ್ದು. ಅದರಂತೆ ನಾವು ಪಾಪ ಪುಣ್ಯಗಳನ್ನು ಅನುಭವಿಸುತಿರಬೇಕು  ಆದರೆ ಆ ಕಷ್ಟಗಳನ್ನು ಅನುಭಸುವುದಕ್ಕೆ ನಮಗೆ ಸಹನಾಶಕ್ತಿ, ಧೈರ್ಯಕೊಟ್ಟು ಮುಂದೆ ಆಗುವ ಕೆಟ್ಟಫಲಗಳನ್ನು ಮೊದಲೇ ತಿಳಿಸಿ ಸುಲಭವಾಗಿ ಪರಿಹಾರ ಮಾಡಲು ಈ ಶಾಸ್ತ್ರವು ದಾರಿ ತೋರಿಸುತ್ತದೆ. 

ಉದಾಹರಣೆಗೆ :- ನಮ್ಮ ಕುಂಡಲಿ ಪ್ರಕಾರ ಮುಂದೆ ಅಪಘಾತವಾಗಿ ಕೈಕಾಲು ಮುರಿದುಕೊಳ್ಳುವ ಬದಲು ಅಪಘಾತದಿಂದ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಬಹುದು, ಒಬ್ಬ ತಂದೆ ಮಗನ ವಿದ್ಯಾಭಾಸ ಮಟ್ಟ ಮೊದಲೇ ತಿಳಿದರೆ ಅವರು ಅದಕ್ಕೆ ಸರಿಹೊಂದುವ ವಿದ್ಯಾಗೆ ಸೇರಿಸಬಹುದು, ಇಲ್ಲದೆ ಅಸೆ ಬಿದ್ದು ಉನ್ನತ ವಿದ್ಯೆ ಕಲಿಯಲು ಅನೇಕವಾಗಿ ಹಣ ಖರ್ಚು ಮಾಡಿ ಕೊನೆಗೆ ನಿರಾಶೆಯಾಗುವರು ಹಣ ಪೋಲು, ಸಮಯ ಪೋಲು ಆಗುವುದು ತಪ್ಪಿಸಬಹುದು.

ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ನಮ್ಮ ದೇಶದಲ್ಲಿ ಅನೇಕರು ನಂಬುವದಿಲ್ಲ ಕಾರಣ ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ಅವರಿಗೆ ಮೂಗಂಡನಂಬಿಕೆ ಮತ್ತು ಸುಳ್ಳು ಎನಿಸಿದೆ. ಈ ಶಾಸ್ತ್ರವು ಹೇಳಿದ ರೀತಿ ನಮ್ಮ ಜೀವನದಲ್ಲಿ ನಡೆಯುತ್ತಿಲ್ಲ, ಹೇಳುವುದೊಂದು ಆಗುವುದು ಇನ್ನೊಂದು ಎಂದು ಮನಗೊಂಡಿದ್ದಾರೆ ಇದು ಅವರ ತಪ್ಪಲ್ಲ, ಈ ಶಾಸ್ತ್ರದ ತಪ್ಪಲ್ಲ ಈ ಶಾಸ್ತ್ರವನ್ನು ಸರಿಯಾಗಿ ಅಭ್ಯಾಸ ಮಾಡದೇ ಫಲ ಜ್ಯೋತಿಷ ಸರಿಯಾಗಿ ತಿಳಿಯದೆ ಅರ್ಧಬಂರ್ಧ ಕಲಿತು ಅಥವಾ ಮಾಡುವ ಕಾರ್ಯದಲ್ಲಿ ಸರಿಯಾಗಿ ಮಾಡದೇ ಇದಾಗ ಇದು ಪ್ರತಿಫಲ ನೀಡುವುದಿಲ್ಲ.

ಆದರೆ ಈ ಶಾಸ್ತ್ರವನ್ನು ನಂಬಿ ಬರುವವರು ಈ ಶಾಸ್ತ್ರದಲ್ಲಿ ಎಲ್ಲವೂ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಕೊಡುತ್ತದೆ ಎಂದು ಬರಬಾರದು ಇದು ದಾರಿ ತೋರಿಸುತ್ತದೆ. ಈ ಶಾಸ್ತ್ರವನು ಅಭ್ಯಾಸ ಮಾಡುವವರು ಕಾಯ, ವಾಚ, ಮನಸಾ, ತಿಳಿದಂತಹ ವ್ಯಕ್ತಿಯು ಪರಿಹಾರ ನೀಡದಾಗ/ಹೇಳಿದಾಗ ಈ ಕ್ರಮವನ್ನು ಸರಿಯಾಗಿ ಮಾಡಿದರೆ ಸ್ವಲ್ಪ ಸ್ವಲ್ಪವಾಗಿ ಪರಿಹಾರ ಖ೦ಡಿತವಾಗುತ್ತದೆ. ಕೆಲವೊಂದು ವೇಳೆ ಶೇಕಡ ೧೦೦ ಭಾಗ ಪರಿಹಾರವಾಗದಿದ್ದರು ಕಡಿಮೆ ಅಥವಾ ಇಲ್ಲದೆ ಇರಬಹುದು ಆಗ ಬೇಸರ ಪಟ್ಟುಕೊಳ್ಳುದೇ ಮತ್ತೆ ಅದೇನೇ ಚೆನ್ನಾಗಿ ತಿಳಿದವರ ಹತ್ತಿರ ಸಲಹೆ ಪಡೆಯಿರಿ ಇದರಿಂದ ಸ್ವಲ್ಪವಾದರೂ ಉತ್ತಮವಾಗುತ್ತದೆ ಅಥವಾ ಮುಂದೆ ಇದಕ್ಕಿಂತ ತೊಂದರೆ ಆಗುವುದು ತಪ್ಪುತ್ತದೆ ಅಥವಾ ಕಡಿಮೆಯಾಗುತ್ತದೆ.


ಸಾಯಿರಾಂ 
ಮಂಜುನಾಥ ಹಾರೊಗೊಪ್ಪ 



No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...